Tuesday 10 February 2015

ಮನದ ಮಾತು

ಹಕ್ಕಿಯಾಗ ಬಯಸಲೆ
ಮರವಾಗಿ ತಲೆಯತ್ತಿ ನಿಲ್ಲಲೆ
ಚಿಟ್ಟೆಯಾಗಿ ನಾಲ್ಕು ದಿನ ಸುಖವಾಗಿ ಬಾಳಲೆ
ಮನುಷ್ಯ ಜೀವನ ಲೇಸೆ0ದು ನಾನು ಹೇಗೆ ಹಲುಬಲಿ

ಎಲ್ಲಿಯೋ ಇತ್ತು ಈ ಸ್ವಾರ್ಥ
ಮನುಷ್ಯರ ಮನದಲ್ಲಿ ಮನೆಕಟ್ಟಲಿದು ಸಮರ್ಥ
ಮತ್ತೆಲ್ಲಿಯೋ ಇತ್ತು ಆ ಲೋಭ
ಲೋಗರ ಮನ ಕದಲಿಸಿ ಏನು ದೊರೆಯಿತು ಲಾಭ

ಎಲ್ಲರೊಳಗಿವೆ ಅರಿಷಡವೈರಿ
ಅವು ಜಗತ್ತಿನೆಲ್ಲಡೆಗೆ ಹಾಕುತ್ತಿವೆ ಮರಿ
ಯಾಕೆ ಹೊರಟಿದೆ ಈ ಜೀವನ ಅದರ ಬೆನ್ನೇರಿ
ಎಲ್ಲಿ ತಲುಪುವುದೋ ಈ ಸವಾರಿ

ಮರೆಯಲ್ಲಿ ಮರೆಯಾಗುತ್ತಿದೆ ಪ್ರೀತಿ
ಮೋಸವೇ ಇ0ದಿನ ದಿನದ ಪ್ರತೀತಿ
ಇದರರಿವಿಲ್ಲದೆ ಮುಗ್ದರು ಹಾಕುತ್ತಿದ್ದಾರೆ ಕಸೂತಿ
ಅದರಲ್ಲಿ ತಲೆಯತ್ತಿ ನಿಲ್ಲುತ್ತಿದೆ ಪ್ರೀತಿ ಕರುಣೆಯ ಮೇಣಬಸ್ತಿ!!!!!

ಸ್ವಪ್ನಾ. ಗ0ಗಲ್
ಬಿ.ಇ(ಆರನೆ ಸೆಮೆಸ್ಟರ್)

No comments:

Post a Comment

COMMENT