Tuesday 10 February 2015

ನನ್ನ ನೆಚ್ಚಿನ ಕವಯಿತ್ರಿ : ಸುಧಾಮೂರ್ತಿ

ನಮ್ಮ ನಾಡಿನಲ್ಲಿ ಅನೇಕ ಜನ ಸಾಹಿತಿಗಳು,ಕಲೆಗಾರರು ತಮ್ಮ ಸೊಬಗನ್ನು
ಮೆರೆದಿದ್ದಾರೆ.ಇನ್ನು ಅನೇಕರು ಹೊಸ ಜಗದಲಿ ಮಿ0ಚುತಿದ್ದಾರೆ.ತಮ್ಮ ಶಬ್ದ ಭ0ಡಾರದಿ0ದ ಅನೇಕರು ಅನೇಕ ಅತ್ಯುನ್ನತ ಪದವಿಗಳನ್ನು ಗಳಿಸಿದ್ದಾರೆ.ಅ0ತಹ ವ್ಯಕ್ತಿಗಳಲ್ಲಿ ಅಸಾಮನ್ಯವಾಗಿರುವ “”ಸುಧಾಮೂರ್ತಿ” ನನಗೆ ಮಾದರಿ ಎ0ದು ಹೇಳಲು ಹೆಮ್ಮೆ ಎನಿಸುತ್ತದೆ.
           ಸುಧಾಮೂರ್ತಿ ಒಬ್ಬ ಸಾಮನ್ಯ ವಿಧ್ಯಾರ್ಥಿನಿ.ಚಿಕ್ಕ0ದಿನಿ0ದಲು ಇವರಿಗೆ ಸಾಹಿತ್ಯದ ಕಡೆಗೆ ಹೆಚ್ಚಿನ ಒಲವು.ಇವರು ಹುಟ್ಟಿದ್ದು 19 ನೇ ಆಗಸ್ಟ 1950.ಇವರು ಇವರು ಅಭಿಯ0ತರ(ಇ0ಜೀನಿಯರಿ0ಗ್)  ವೃತ್ತಿ ಆಯ್ಕೆ ಮಾಡಿಕೊ0ಡರು.ಹುಬ್ಬಳ್ಳಿಯಲ್ಲಿ ವೃತ್ತಿ ಪದವಿ ಮುಗಿಸಿ “”ಪ್ರಥಮ ಮಹಿಳಾ ಅಭಿಯ0ತ್ರಿತೆ”ಎನಿಸಿಕೊ0ಡರು.ಅದಲ್ಲದೆ ಅವರು ಆ ಕಾಲದ ಮುಖ್ಯಮ0ತ್ರಿಯವರಿ0ದ ಬ0ಗಾರದ ಪದಕವನ್ನು ಪಡೆದರು.ಇವರಿಗೆ ರೊಟರಿ ಕ್ಲಬ್ ಬೆ0ಗಳೂರು ವತಿಯಿ0ದ ಆದರ್ಶ ಶಿಕ್ಷಕಿ ಪ್ರಶಸ್ತಿ ಲಭಿಸಿದೆ(1995).ಇನ್ಫೊಸಿಸಿ ನ ಭಾಗವಾದ ಇವರು ಸಾವಿರಾರು ನಿರೋದ್ಯೋಗಿಗಳಿಗೆ ಉದ್ಯೋಗಾವಕಾಶ ನೀಡಿದ್ದಾರೆ.
                   ಇವರಲ್ಲಿರುವ ಸರಳತೆ,ನಯ-ವಿನಯತೆಗೆ ಎ0ತಹ ಕಲ್ಲು ಮನದ ಮಾನವನೂ ಸಹ ಕರಗಿ ನೀರಾಗುವನು.ಇವರು ಬರೆದ ಪ್ರಸಿದ್ಧ ಪುಸ್ತಕಗಳು “”ಸಾಮಾನ್ಯರಲ್ಲಿ ಅಸಾಮಾನ್ಯರು,ಪರಿಧಿ,ಗುಟ್ಟೊ0ದು ಹೇಳುವೆ,ಮನದ ಮಾತು ಇತ್ಯಾದಿ.ಈ ಎಲ್ಲಾ ಪುಸ್ತಕಗಳನ್ನು ನಾನು ಓದಿ ಹೊಸ ಹೊಸ ಸಾತ್ವಿಕ ಗುಣಗಳನ್ನು ಕಲಿತಿದ್ದೇನೆ.ಇವರು ಬರೆದ ಅನೇಕ ಕೃತಿಗಳು ಬಹುಭಾಷೆಗೆ ಅನುವಾದಗೊ0ಡಿವೆ.
        ಸುಧಾಮೂರ್ತಿಯಲ್ಲಿರುವ ಛಲ,ಗುರಿ,ಭಕ್ತಿ ಇವೆಲ್ಲವುಗಳಿ0ದ ಪ್ರೇರಿತಳಾದ ನನಗೆ ಸುಧಾಮೂರ್ತಿ ಮಾದರಿಯ ಆಶಾಕಿರಣ.ಅವರಲ್ಲಿರುವ
ಗುಣಗಳನ್ನು ನಾವು ಅಳವಡಿಸಿಕೊ0ಡರೆ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ.ಸುಧಾಮೂರ್ತಿ ಬರೀ ಸಾಹಿತಿಯಲ್ಲ ಭಾರತದ ಸಾಹಿತ್ಯ ರತ್ನ.
  ಲಕ್ಷ್ಮೀ . ದೇಶಪಾ0ಡೆ
 ಬಿ.ಇ (ಎರಡನೆ ಸೆಮೆಸ್ಟರ್)

No comments:

Post a Comment

COMMENT